ಹೊರನಾಡಿನ ತುಳುವರಾಗಿ ತುಳು ಚಿತ್ರ ನಿರ್ಮಾಣ ಮಾಡಿದವರಲ್ಲಿ ರಾಮ್ ವಿಠಲ ಶೆಟ್ಟಿ ಮೊದಲಿಗರು. 1962ರಿಂದಲೇ ಮುಂಬಯಿಯಲ್ಲಿ ನೆಲೆಸಿರುವ ಅವರು, ಮಹಾರಾಷ್ಟ್ರ ಕಬಡ್ಡಿ ತಂಡದ ಸದಸ್ಯರಾಗಿದ್ದರು. ನಂತರ 1970ರಲ್ಲಿ ಹಿಂದಿ ಚಿತ್ರರಂಗದ ನಂಟು ಬೆಳೆಯಿತು.
ಘಟಾನುಘಟಿ ನಟರಿಗೆ ಡ್ಯೂಪ್ ಆಗಿ, ಸ್ಟಂಟ್ಮನ್ ಆಗಿ ಕಾರ್ಯನಿರ್ವಹಿಸಿದ ಅವರು ನಂತರ ಸಾಹಸ ನಿರ್ದೇಶಕ
ರಾಗಿ ಅನೇಕ ಹಿಂದಿ ಮತ್ತು ಕನ್ನಡ ಚಿತ್ರಗಳಲ್ಲಿ ಕೆಲಸಮಾಡಿದ್ದಾರೆ. ಇನ್ನೂ ಮುಂದುವರಿದು ಹಿಂದಿ ಚಿತ್ರ ನಿರ್ಮಾಪಕರೂ ಆದರು. ತುಳು ಚಿತ್ರರಂಗಕ್ಕೆ ಹಿಂದಿ ನಂಟು ಬೆಳೆಯಲು ಕಾರಣರಾದರು. ಅವರು ಹಿಂದಿ, ಮರಾಠಿ ನಿರ್ದೇಶಕರೂ ಆದರು. ತುಳುವಿನಲ್ಲಿ ಮೂರು ಚಿತ್ರಗಳನ್ನು ನಿರ್ಮಿಸಿ ಎರಡರಲ್ಲಿ ನಿರ್ದೇಶನವನ್ನೂ ಮಾಡಿದ್ದಾರೆ.ತುಳುವಿನಲ್ಲಿ ಅವರ ಮೊದಲ ಚಿತ್ರ ‘ಆನಂದ್ ಮೂವೀಸ್’ ಬ್ಯಾನರ್ನಲ್ಲಿ 1983ರಲ್ಲಿ ನಿರ್ಮಿಸಿದ ‘ಬದ್ಕೆರೆ ಬುಡ್ಲೆ’. ಆರೂರು ಪಟ್ಟಾಭಿ ನಿರ್ದೇಶನದ ಈ ಚಿತ್ರ ಸಾಕಷ್ಟು ಯಶಸ್ವಿಯಾಗಿತ್ತು. ಮರುವರ್ಷವೇ ಅವರು ನಿರ್ಮಿಸಿದ ಇನ್ನೊಂದು ಯಶಸ್ವಿ ಚಿತ್ರ ‘ದಾರೆದ ಸೀರೆ’. ಅದರಲ್ಲಿ ಅವರು ನಿರ್ದೇಶನಕ್ಕೂ ಇಳಿದರು. ನಂತರ ಅವರು ನಿರ್ಮಿಸಿ ನಿರ್ದೇಶಿಸಿದ ಚಿತ್ರ 2012ರ ‘ಬಂಗಾರ್ದ ಕುರಲ್’. ಇದು ಏಳು ಚಿತ್ರ ಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆಗೊಂಡ ಮೊದಲ ತುಳು ಚಿತ್ರವಾಗಿತ್ತು.
Leave a Reply
Be the First to Comment!