ಶ್ರೀ ಮುತ್ತುರಾಮ್ ಕ್ರಿಯೇಶನ್ಸ್ ಲಾಂಛನದಲ್ಲಿ ನಿರ್ಮಾಣದ ಪತ್ರಕರ್ತ ಇಸ್ಮಾಯಿಲ್ ಮೂಡುಶೆಡ್ಡೆ ನಿರ್ದೇಶನದ ಕನ್ನಡ ಚಲನ ಚಿತ್ರ “ಬಣ್ಣ ಬಣ್ಣದ ಬದುಕು” ಚಿತ್ರೀಕರಣ ಸಂಪೂರ್ಣ ಗೊಂಡಿದ್ದು ಬಿಡುಗಡೆಗೆ ಸಿಧ್ಧಗೊಂಡಿದೆ. ಯಕ್ಷಗಾನ ಕಲಾವಿದನ ಬದುಕಿನ ಸುತ್ತ ಸಾಗುವ ಈ ಚಿತ್ರಕ್ಕೆ ಕಥೆ,ಚಿತ್ರಕಥೆ,ಸಂಭಾಷಣೆ ನಿರ್ದೇಶನ ಇಸ್ಮಾಯಿಲ್ ಮೂಡುಶೆಡ್ಡೆಯವರದ್ದು. ಈ ಚಿತ್ರವನ್ನು ಉದ್ಯಮಿ ಕೃಷ್ಣ ನಾಯ್ಕ ಕಾರ್ಕಳದವರು ನಿರ್ಮಿಸಿದ್ದಾರೆ.ಮಂಗಳೂರು,ಕಾರ್ಕಳ,ತೀರ್ಥಹಳ್ಳಿ,ಪಿಲಿಕುಳ ಮೊದಲಾದ ಕಡೆ ಸುಮಾರು 37 ದಿನಗಳ ಕಾಲ ಚಿತ್ರೀಕರಿಸಿದ ಚಿತ್ರತಂಡ.ಅಕ್ಟೋಬರ್ 5 ರಂದು ಮಂಗಳೂರಿನ ಪುರಭವನದಲ್ಲಿ ಧ್ವನಿ ಸುರುಳಿ ಬಿಡುಗಡೆಗೊಳಿಸಲಿದೆ.ಮುಂಬೈನ ಮಾಡಲಿಂಗ್ ಕ್ಷೇತ್ರದಲ್ಲಿ ಗುರುತಿಸಿ ಕೊಂಡಿದ್ದ ರವಿರಾಜ್ ಶೆಟ್ಟಿ ಹಾಗೂ ಅನ್ವಿತಾ ಸಾಗರ್ ನಾಯಕ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಖ್ಯಾತ ಯಕ್ಷಗಾನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ಹಾಗೂ ಬಲಿಪ ನಾರಾಯಣ ಭಾಗವತರು ಭಾಗವತಿಕೆಯ ಜೊತೆ ಅಭಿನಯಿಸಿದ್ದಾರೆ.ಚಿತ್ರದಲ್ಲಿ ಒಟ್ಟು 4 ಹಾಡುಗಳಿದ್ದು ಎ.ಕೆ ವಿಜಯ್ (ಕೋಕಿಲ)ಸ್ವರ ಸಂಯೋಜನೆ ಮಾಡಿದ್ದಾರೆ. ಸಾಹಿತ್ಯ ಶಶಿರಾಜ್ ಕಾವೂರು ಮತ್ತು ಸುರೇಶ್ ಆರ್.ಎಸ್ ಅವರದ್ದು.ಸಂಕಲನ-ನಾಗೇಂದ್ರ ಅರಸ್,ಛಾಯಾಗ್ರಹಣ-ವಿಜಯ್.ಎಸ್,ಸಹನಿರ್ದೇಶನ ಬಾಲಕೃಷ್ಣ ಬರಗೂರು,ಸುರೇಶ್ ಆರ್.ಎಸ್.ಅನುಷಾ ಹೆಗ್ಡೆ,ನವೀನ್ ಬೊಂದೇಲ್ ಅವರದ್ದು.
ತಾರಾಗಣ : ರವಿರಾಜ್ ಶೆಟ್ಟಿ,ಅನ್ವಿತಾ ಸಾಗರ್,ರಮೇಶ್ ಭಟ್,ಸತ್ಯಜಿತ್ ಹೊನ್ನವಳ್ಳಿ ಕೃಷ್ಣ,ಗೋಪಿನಾಥ್ ಭಟ್,ಚೇತನ್ ರೈ ಮಾಣಿ,ಲಕ್ಷ್ಮಣ ಕುಮಾರ್ ಮಲ್ಲೂರು ರಿಯಾ ಮೇಘನಾ,ಶಾಂತಿ ಶೆಣೈ,ಮಂಗೇಶ್ ಭಟ್,ಖಾಲಿದ್ ಉಜಿರೆ,ಅಬೂಬಕ್ಕರ್,ನವೀನ್ ಬೊಂದೇಲ್,ಬೇಬಿ ಶ್ರೇಯಾದಾಸ್,ಮಾ/ ಗೌತಮ್,ಮಾ/ ಗಗನ್ ಮುಂತಾದವರು ಅಭಿನಯಿಸಿದ್ದಾರೆ.
Leave a Reply
Be the First to Comment!