ಕಲಾ ಜಗತ್ತು ಕ್ರಿಯೇಷನ್ಸ್ ಅರ್ಪಿಸುವ ತೋನ್ಸೆ ವಿಜಯ ಕುಮಾರ್ ಶೆಟ್ಟಿಯವರು ಕಥೆ,ಚಿತ್ರಕಥೆ ಬರೆದು ನಿರ್ದೇಶಿಸಲಿರುವ ತುಳು ಚಲನ ಚಿತ್ರ “ಪತ್ತನಾಜೆ” ಚಿತ್ರದ ಮೂಹೂರ್ತ ಸಮಾರಂಭವು ಸೆ.16ರಂದು ಪಾವಂಜೆ ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಜರಗಿತು.ತುಳುವರೆಪರ್ಬ ಎಂಬ ಟ್ಯಾಗ್ ಲೈನ್ ಇರುವ ಈ ಚಿತ್ರವು ಯಕ್ಷಗಾನ ಕಲಾವಿದನ ಜೀವನ ಆಧಾರಿತ ಕಥೆಯಾಗಿದ್ದು.ಚಿತ್ರಕ್ಕೆ ಸಂಭಾಷಣೆಯನ್ನು ವಿಜಯಕುಮಾರ್ ಕೊಡಿಯಾಲ್ ಬೈಲ್ ಬರೆದಿದ್ದಾರೆ.ವಿ.ಮನೋಹರ್ ಅವರ ಸಂಗೀತ ನಿರ್ದೇಶನವಿರುವ ಈಚಿತ್ರದಲ್ಲಿ ಒಟ್ಟು 7 ಹಾಡುಗಳಿದ್ದು. ನವನೀತಶೆಟ್ಟಿ ಕದ್ರಿ,ಭಾಸ್ಕರರೈ ಕುಕ್ಕುವಳ್ಳಿ,ವಿಜಯ ಕುಮಾರ್ ಕೊಡಿಯಾಲ್ ಬೈಲ್,ವಿ.ಮನೋಹರ್,ತೋನ್ಸೆ ವಿಜಯ ಕುಮಾರ್ ಶೆಟ್ಟಿ,ಡಾ/ ದಿನಕರ ಪಚ್ಚನಾಡಿ ಹಾಗೂ ಡಾ/ ಸುನೀತಾ ಶೆಟ್ಟಿ, ಹಾಡುಗಳನ್ನು ಬರೆದಿದ್ದಾರೆ.ಚಿತ್ರದಲ್ಲಿ ಶಿವಧ್ವಜ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದು,ಸೂರ್ಯರಾವ್,ರೇಶ್ಮಾ ಶೆಟ್ಟಿ,ಉಷಾ ಭಂಡಾರಿ,ಚೇತನ್ ರೈ ಮಾಣಿ,ಸುಂದರರೈಮಂದಾರ,ರವಿಸುರತ್ಕಲ್,ಸುರೇಂದ್ರಹೆಗ್ಡೆ,ಪಲ್ಲವಿ,ರಮೇಶ್ ರೈಕುಕ್ಕುವಳ್ಳಿಮೊದಲಾದವರು ಅಭಿನಯಿಸಲಿದ್ದಾರೆ.ಚಿತ್ರಕ್ಕೆ ಸುರೇಶ್ ಬಾಬು-ಛಾಯಾಗ್ರಹಣ,ಸುಜಿತ್ ನಾಯಕ್-ಸಂಕಲನ,ಶಶಿಧರ್ ಅಡಪ-ಕಲೆ,ಹಾಗೂ ಮದನ್ ಹರಿಣಿಯವರ ನೃತ್ಯ ಸಂಯೋಜನೆ ಚಿತ್ರಕ್ಕಿದೆ.
Leave a Reply
Be the First to Comment!