ಶ್ರೀ ರಾಜರಾಜೇಶ್ವರಿ ಸಿನಿ ಸರ್ಕ್ಯೂಟ್ ನಿರ್ಮಾಣದ ತುಳು ಚಲನ ಚಿತ್ರ “ನಮ್ಮ ಕುಸಲ್ದ ಜವನ್ಯೆರ್” ಚಿತ್ರದ ಮೂಹೂರ್ತವು ಇತ್ತೀಚಿಗೆ ಮಂಗಳೂರಿನ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನೆರವೇರಿತು.
ಮಾರ್ಲ್ ದ ಜೋಕ್ಲು,ಪೊರ್ಲುದ ಕಥೆ,ತೂದುಬರ್ಕಬಲೆ ಎಂಬ ಟ್ಯಾಗ್ ಲೈನ್ ಇರುವ ಈ ಚಿತ್ರವನ್ನು ಕನ್ನಡ,ತಮಿಳು,ಲಂಬಾಣಿ ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ದುಡಿದು ಅನುಭವವಿರುವ ಗಣೇಶ್ ದಾಸ್ ಖಾರ್ವಿ ಕುಂದಾಪುರ ಅವರು ಕಥೆ,ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಸಲಿದ್ದಾರೆ.ರಿಚಾರ್ಡ್ ಕಾರ್ಕಳ ಅವರು ಚಿತ್ರದ ಸಹನಿರ್ಮಾಪಕರು ಚಿತ್ರದಲ್ಲಿ ಒಟ್ಟು 4 ಹಾಡುಗಳಿದ್ದು.ಮಜಾ ಟಾಕೀಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೋಹನ್ ಕಾರ್ಕಳ ಸಂಗೀತ ನಿರ್ದೇಶಿಸಲಿದ್ದಾರೆ.
ಮಂಗಳೂರಿನ ಹಳೆಬಂದರು,ಉಡುಪಿ,ಮಲ್ಪೆ,ಕಾರ್ಕಳದಲ್ಲಿ ಚಿತ್ರೀಕರಣ ನಡೆಯಲಿದ್ದು. ಧನಿಕ್ಲೆನ ಜೋಕ್ಲು ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ ಅಮಿತ್ ಕರ್ಕಡ ನಾಯಕನಾಗಿ ಅಭಿನಯಿಸಲಿದ್ದು. ಶೋಭಿತಾ ಅಮೀನ್ ನಾಯಕಿ ಉಳಿದಂತೆ ಉಮೇಶ್ ಮಿಜಾರ್,ಸತೀಶ್ ಬಂದಲೆ,ಅರವಿಂದ ಬೋಳಾರ್,ಬ್ಯಾಂಕ್ ಜನಾರ್ದನ್ ,ರಾಜಶೇಖರ್, ಕೈಲಾಶ್,ವಿನ್ನಿ ಫೆರ್ನಾಂಡೀಸ್,ಸಂದೀಪ್ ಮೊದಲಾದವರು ಅಭಿನಯಿಸಲಿದ್ದಾರೆ.
Leave a Reply
Be the First to Comment!