ಡಾ. ಸಂಜೀವ ಪಿ. ದಂಡಕೇರಿ
ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿದ್ದರೂ, ನಾಟಕ ಮತ್ತು ಚಲನಚಿತ್ರ ರಂಗದಲ್ಲಿ ಅತ್ಯಂತ ಸಕ್ರಿಯವಾಗಿ ತೊಡಗಿಸಿಕೊಂಡವರಲ್ಲಿ ಒಬ್ಬರು ಡಾ. ಸಂಜೀವ ಪಿ. ದಂಡೆಕೇರಿಯವರು. (ಪದವು ಸಂಜೀವ ದಂಡೆಕೇರಿ). ತುಳುನಾಡಿನ ಅತ್ಯಂತ ಪ್ರಸಿದ್ಧ ನಾಟಕಕಾರರಲ್ಲಿ ಒಬ್ಬರಾದ ದಂಡೆಕೇರಿಯವರ ‘ಬಯ್ಯಮಲ್ಲಿಗೆ’ ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡ ಹೆಗ್ಗಳಿಕೆ ಹೊಂದಿದೆ.
ರಂಗಭೂಮಿಯಲ್ಲಿ ನಾಟಕಕಾರರಾಗಿ, ನಿರ್ದೇಶಕರಾಗಿ ಹೆಸರು ಮಾಡಿದ ಅವರು ಚಿತ್ರರಂಗಕ್ಕೂ ಕಾಲಿಟ್ಟರು. ತಮ್ಮದೇ ನಾಟಕವನ್ನು ಆಧರಿಸಿ, 1974ರಲ್ಲಿ ‘ಬಯ್ಯಮಲ್ಲಿಗೆ’ ಚಿತ್ರ ನಿರ್ಮಿಸಿ ಯಶಸ್ಸು ಕಂಡರು. ತಮ್ಮದೇ ‘ಗಂಗಾರಾಮ್’ ಹೆಸರಿನ ನಾಟಕವನ್ನು 1977ರಲ್ಲಿ ‘ಬೊಳ್ಳಿದೋಟ’ ಎಂಬ ಹೆಸರಿನಲ್ಲಿ ಚಲನಚಿತ್ರವಾಗಿ ನಿರ್ಮಿಸಿದರು. ಈ ಚಿತ್ರದ ಹಾಡುಗಳು ತುಂಬಾ ಜನಪ್ರಿಯವಾಗಿದ್ದವು. ಆರಂಭದ ದಿನಗಳಲ್ಲಿ ಎರಡು ಹಿಟ್ ಚಿತ್ರಗಳನ್ನು ನಿರ್ಮಿಸಿ ಉಳಿದ ನಿರ್ಮಾಪಕರಿಗೆ ತುಳು ಚಿತ್ರ ನಿರ್ಮಿಸುವ ಧೈರ್ಯ ಹೆಚ್ಚಿಸುವಲ್ಲಿ ಅವರ ಪಾತ್ರ ದೊಡ್ಡದು.
ಆರಂಭದಲ್ಲಿ ವೈದ್ಯರಾಗಿ, ನಂತರ ಬಿಲ್ದರ್ ಆಗಿ ಮುಂದುವರಿದರೂ, ನಿರಂತರವಾಗಿ ರಂಗಭೂಮಿಯ ನಂಟನ್ನು ಬಿಡದೇ ನಾಟಕ ರಂಗಕ್ಕೆ ಪ್ರೋತ್ಸಾಹ ನೀಡುತ್ತಾ ಬಂದವರು ಡಾ. ಸಂಜೀವ ಪಿ. ದಂಡೆಕೇರಿಯವರು.
Leave a Reply
Be the First to Comment!