ಡಾ/ಜಯಮಾಲ
ಕನ್ನಡ ಚಿತ್ರರಂಗದ ಗಿರಿಕನೈ ಎಂದು ಹೆಸರಾದ ಜಯಮಾಲ ಮೂಲತಃ ದ.ಕ.ಜಿಲ್ಲೆಯವರು. ತಂದೆ ಜಿ.ಓಮಯ್ಯ ತಾಯಿ ಕಮಲಮ್ಮ ಕೃಷಿ ಕುಟುಂಬದಲ್ಲಿ 1959 ರಲ್ಲಿ ಜನಿಸಿದ ಜಯಮಾಲ ಅವರಿಗೆ 6 ಮಂದಿ ಸಹೋದರಿಯರು ಹಾಗೂ ಒಬ್ಬ ಸಹೋದರ.ಜಯಮಾಲ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದು ಆನಂದ ಶೇಖರ್ ನಿರ್ಮಾಣದ ಗೀತ ಪ್ರಿಯ ನಿರ್ದೇಶಿಸಿದ ಕಾಸ್ ದಾಯೆ ಕಂಡನಿ ತುಳು ಚಿತ್ರದ ಮೂಲಕ ನಂತರ ಯಾನ್ ಸನ್ಯಾಸಿ ಅಪೆ,ಬಯ್ಯಮಲ್ಲಿಗೆ ಚಿತ್ರಗಳಲ್ಲಿ ಅಭಿನಯಿಸಿದ ಜಯಮಾಲ ಅವರು ನಂತರ ಕನ್ನಡ ಚಿತ್ರರಂಗ ಪ್ರವೇಶಿಸಿದರು.
ಕನ್ನಡದ ಮೇರುನಟ ಡಾ ರಾಜ್ ಕುಮಾರ್ರೊಂದಿಗೆ ಗಿರಿಕನ್ಯೆ ಚಿತ್ರದಲ್ಲಿ ನಟಿಸುವುದರೊಂದಿಗೆ ಜನಪ್ರಿಯ ನಾಯಕಿಯರ ಸಾಲಿಗೆ ಸೇರಿದ ಇವರು.ವಿಷ್ಣುವರ್ಧನ್, ಅಂಬರೀಶ್,ಟೈಗರ್ ಪ್ರಭಾಕರ್,ಶಂಕರ್ ನಾಗ್,ಮೊದಲಾದ ಖ್ಯಾತನಟರೊಂದಿಗೆ ಅಲ್ಲದೆ ತಮಿಳು,ತೆಲುಗು,ಹಿಂದಿ ಚಿತ್ರ ಸೇರಿದಂತೆ 85 ಕ್ಕೂ ಮಿಕ್ಕಿ ಚಲನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರ ಅಭಿನಯಾದ ಚಿತ್ರಗಳಾದ ದಾರಿ ತಪ್ಪಿದಮಗ,ತ್ರಿಮೂರ್ತಿ,ಬಡವರ ಬಂಧು ಬಭ್ರುವಾಹನ,ಶಂಕರ ಗುರು,ಅಂತ,ಅಜಿತ್,ತಿರುಗುಬಾಣ ಜಿದ್ದು,ಖದೀಮಕಳ್ಳರು,ಚಂಡಿಚಾಮುಂಡಿ ಇವರಿಗೆ ಜನಪ್ರಿಯತೆಯನ್ನು ತಂದು ಕೊಟ್ಟ ಚಿತ್ರಗಳು.ಅಭಿನಯದೊಂದಿಗೆ ಚಿತ್ರ ನಿರ್ಮಾಣಕ್ಕೂ ಇಳಿದ ಇವರು ಗಿರೀಶ್ ಕಾಸರವಳ್ಳಿ ನಿರ್ದೇಶನದ ತಾಯಿಸಾಹೇಬ ಚಿತ್ರವನ್ನು ನಿರ್ಮಿಸಿ ಕನ್ನಡ ಚಿತ್ರರಂಗಕ್ಕೆ ಸ್ವರ್ಣಕಮಲ ಪ್ರಶಸ್ತಿಯನ್ನು ತಂದು ಕೊಟ್ಟರಲ್ಲದೆ. ಈ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಅಲ್ಲದೆ ದೇಶ ವಿದೇಶಗಳಲ್ಲಿ ಸುಮಾರು 24 ಪ್ರಶಸ್ತಿಯನ್ನು ಪಡೆದಿದೆ. ಆ ನಂತರ ಅವರು ನಿರ್ಮಿಸಿ ಪಿ.ಶೇಷಾದ್ರಿಯವರು ನಿರ್ದೇಶಿಸಿದ ಮಕ್ಕಳ ಚಿತ್ರ ತುತ್ತೂರಿ ಕೂಡ ದೇಶ,ವಿದೇಶಗಳಲ್ಲಿ ಹಲವಾರು ಪ್ರಶಸ್ತಿಯನ್ನು ಪಡೆದಿದೆ.
Leave a Reply
Be the First to Comment!