ಸ್ನೇಹ ಕೃಪಾ ಮೂವೀಸ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಸುಧಾಕರ ಬನ್ನಂಜೆ ನಿರ್ದೇಶನದ “ಗಂಟ್ ಕಲ್ವೆರ್” ಎಂಬ ತುಳು ಚಲನ ಚಿತ್ರದ ಮೂಹೂರ್ತ ಸಮಾರಂಭವು ದಿನಾಂಕ 29.3.2017 ರಂದು ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಜರಗಿತು.ಈ ಮೊದಲು “ದೇವೆರ್ “ಎಂಬ ತುಳು ಚಿತ್ರವನ್ನು ನಿರ್ದೇಶಿಸಿದ ಬನ್ನಂಜೆ ಯವರು ಈ ಭಾರಿ ಹಾಸ್ಯ ಕ್ಕೆ ಒತ್ತು ನೀಡಿದ್ದಾರೆ. ಕಥೆ, ಚಿತ್ರಕಥೆ ,ಸಾಹಿತ್ಯ,ಸಂಭಾಷಣೆ,ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿರುವ ಬನ್ನಂಜೆಯವರು.ಗಂಟ್ ಕಲ್ವೆರ್ ಚಿತ್ರವನ್ನು ಸುಮಾರು 50ದಿನಗಳ ಕಾಲ ಮೂರು ಹಂತಗಳಲ್ಲಿ ಚಿತ್ರೀಕರಿಸಲು ನಿರ್ಧರಿಸಿದ್ದಾರೆ. ಹೊಸ ಪ್ರತಿಭೆಗಳಾದ ವಿಜೇಶ್ ಶೆಟ್ಟಿ ನಾಯಕನಾಗಿ ಹಾಗೂ ಸ್ಮೀತಾ ಸುವರ್ಣ ನಾಯಕಿಯಗಿ ಅಭಿನಯಿಸುತ್ತಿದ್ದಾರೆ.ಅಲ್ಲದೆ ನವೀನ್ ಡಿ ಪಡೀಲ್ ,ಭೋಜರಾಜ್ ವಾಮಂಜೂರು,ಅರವಿಂದ ಬೋಳಾರ್,ಸುಂದರ್ ರೈ ಮಂದಾರ ಉಮೇಶ್ ಮಿಜಾರ್,ಸಂದೀಪ್ ಶೆಟ್ಟಿ,ಪ್ರದೀಪ್ ಆಳ್ವ, ಸುಧೀರ್ ಕೊಟ್ಟಾರಿ,ಸುರೇಂದ್ರ ಬಂಟ್ಟಾಳ್,ಪಜ್ವಲ್ ಪಾಂಡೇಶ್ವರ್,ಶೇಖರ್ ಭಂಡಾರಿ,ಯಾದವ ಮಣ್ಣು ಗುಡ್ಡೆ,ದೀಶಾ ಪುತ್ರನ್,ಮೈತಿ ಭಟ್,ಸಿಂಚನ,ಪ್ರೇರಣ್ ಮೊದಲಾದವರು ಅಭಿನಯಿಸಲಿದ್ದಾರೆ.ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು ಸುಧಾಕರ ಬನ್ನಂಜೆ ಸೃಜನ್ ಹಾಗೂ ಕೀರ್ತನ್ ಭಂಡಾರಿಯವರು ಸಾಹಿತ್ಯ ಬರೆದಿದ್ದಾರೆ.ಹರ್ಷವರ್ಧನ್ ಅವರ ಸಂಗೀತ,ಶಂಕರ್ ಅವರ ಛಾಯಾಗ್ರಹಣ ಸಂಕಲನ ಕೆ.ಗಿರೀಶ್ ಕುಮಾರ್,ಸಹ ನಿರ್ದೇಶನ -ರಾಮ್ ದಾಸ್ ಸಸಿಹಿತ್ಲು ವಿ.ಕೆ ಪ್ರಶಾಂತ್ ಕಲೆ-ತಮ್ಮ ಲಕ್ಷ್ಮಣ್,ಕಾರ್ಯ ಕಾರಿ ನಿರ್ಮಾಪಕರು-ಶೇಖರ್ ಭಂಡಾರಿ ಸಹ ನಿರ್ಮಾಪಕರು ರಾಜಾರಾಮ್ ಶೆಟ್ಟಿ ಉಪ್ಪಳ,ನಾಗೇಶ್ ಡಿ.ಶೆಟ್ಟಿ ಮೂಡಬಿದ್ರೆ ಕೃತಿ ಆರ್ .ಶೆಟ್ಟಿ,ಡಾ|| ವಿಶಾಲ್ ನಾಯಕ್ ನಿರ್ಮಾಣ-ನಿರ್ವಾಹಣೆ ಸತೀಶ್ ಬ್ರಹ್ಮಾವರ ಅವರದ್ದು.
Leave a Reply
Be the First to Comment!