ಆರೂರು ಪಟ್ಟಾಭಿ
Published on 29 August 2016
ಎರಡನೆಯದಾಗಿ ಬಿಡುಗಡೆಗೊಂಡರೂ ಪ್ರಪ್ರಥಮವಾಗಿ ಚಿತ್ರೀಕರಣಗೊಂಡ ತುಳು ಚಿತ್ರ ‘ದಾರೆದ ಬುಡೆದಿ’ಯ ನಿರ್ದೇಶಕರು ಆರೂರು ಪಟ್ಟಾಭಿ. ಡಾ. ರಾಜ್ ಕುಮಾರ್ ಅಭಿನಯದ ಕೆಲ ಚಿತ್ರಗಳೂ ಸೇರಿದಂತೆ 15 ಕನ್ನಡ ಚಿತ್ರಗಳನ್ನು ನಿರ್ದೇಶಿಸಿರುವ ಅವರು ಒಂಬತ್ತು ತುಳು ಚಿತ್ರಗಳನ್ನು ನಿರ್ದೇಶಿಸಿ, ತುಳು ಚಿತ್ರರಂಗದಲ್ಲಿ ದಾಖಲೆ ಸ್ಥಾಪಿಸಿದ್ದಾರೆ. ಅವರು ನಿರ್ದೇಶಿಸಿದ ಇತರ ಎಂಟು ಚಿತ್ರಗಳೆಂದರೆ ‘ಪಗೆತ ಪುಗೆ’, ‘ಬಿಸತ್ತಿ ಬಾಬು’, ‘ಬಯ್ಯ ಮಲ್ಲಿಗೆ’, ‘ಬೊಳ್ಳಿದೋಟ’, ‘ಕರಿಯಣಿ ಕಟ್ಟಂದಿ ಕಂಡನೆ’, ‘ಭಾಗ್ಯವಂತೆದಿ’, ‘ಬದ್ಕೆರೆ ಬುಡ್ಲೆ’ ಮತ್ತು ‘ಸತ್ಯ ಓಲುಂಡು’. ಅವರು ತಮ್ಮ ಆರೂರು ಕುಟುಂಬದ ಇತರ ಸದಸ್ಯರೊಂದಿಗೆ ‘ಕರಿಯಣಿ ಕಟ್ಟಂದಿ ಕಂಡನೆ’ ಚಿತ್ರದ ನಿರ್ಮಾಪಕರಲ್ಲಿಯೂ ಒಬ್ಬರಾಗಿದ್ದರು. ಆ ಕಾಲದ ಮಟ್ಟಿಗೆ ಹೆಚ್ಚಿನ ಹಿಟ್ ಚಿತ್ರಗಳನ್ನು ನೀಡಿರುವ ಅವರು ತುಳುವಾಡಿನ ಅತ್ಯಂತ ಯಶಸ್ವಿ ನಿರ್ದೇಶಕರೂ ಹೌದು.
Leave a Reply
Be the First to Comment!