ಅನಾರ್ಕಲಿ
Published on 21 March 2017
ಕುಡ್ಲ ಟಾಕೀಸ್ ಲಾಂಛನದಲ್ಲಿ ಐವರು ಸ್ನೇಹಿತರು ಸೇರಿ ಕೊಂಡು ನಿರ್ಮಿಸುತ್ತಿರುವ ತುಳುಚಲನ ಚಿತ್ರ ಅನಾರ್ಕಲಿ ಇದೇ ಮಾರ್ಚ್ ಅಂತ್ಯದಲ್ಲಿ ಸಟ್ಟೇರಲಿದೆ.ಈಗಾಗಲೇ “ಬಣ್ಣ ಬಣ್ಣದ ಬದುಕು” ಎಂಬ ಕನ್ನಡ ಚಲನಚಿತ್ರ ನಿರ್ದೇಶಿಸಿದ ಇಸ್ಮಾಯಿಲ್ ಮೂಡುಶೆಡ್ಡೆಯವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.ಸಂಪೂರ್ಣ ಹಾಸ್ಯ ಕಥೆಯನ್ನು ಹೊಂದಿದ ಈ ಚಿತ್ರಕ್ಕೆ ಮನೋಜ್ ಪುತ್ತೂರು ನಾಯಕನಾಗಿ,ರಂಬಾರೂಟಿ ಚಿತ್ರದಲ್ಲಿ ನಟಿಸಿದ ಶೃತಿ ಕೋಟ್ಯಾನ್ ನಾಯಕಿಯಾಗಿ ಅಲ್ಲದೆ ಸ್ವಪ್ನ ಎರಡನೇ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.ಚಿತ್ರದಲ್ಲಿ ಒಟ್ಟು 4 ಹಾಡುಗಿಳಿದ್ದು ರಾಜೇಶ್ ಭಟ್ ಮೂಡಬಿದ್ರೆ ಮತ್ತು ಸತೀಶ್ ಬಾಬು ಸ್ವರ ಸಂಯೋಜನೆ ಮಾಡಲಿದ್ದಾರೆ.
ವಿರಾತ್ ಮೂರ್ತಿಯವರ ಛಾಯಾಗ್ರಹಣ,ರಾಜೇಶ್ ಭಟ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ತಾರಾಗಣದಲ್ಲಿ: ಸ್ಯಾಂಡಲ್ ವುಡ್ ನಟ ಶೋಭರಾಜ್,ಶಿವಧ್ವಜ್, ಪ್ರಾಣೇಶ್ ಶೆಟ್ಟಿ, ಸತೀಶ್ ಬಂದಲೆ ,ಮಿಮಿಕ್ರಿ ಶರಣ್ ಅಲ್ಲದೆ ತುಳು ಚಿತ್ರರಂಗದ ಬಹುತೇಕ ಹ್ಯಾಸ ಕಲಾವಿದರು ಅಭಿನಯಿಸಲ್ಲಿದ್ದಾರೆ.
Leave a Reply
Be the First to Comment!